ಕೊಪ್ಪಳ: ನಗರದ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಮಹಿಳಾ ಹಾಸ್ಟೆಲ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಡುತ್ತಿರುವ ಶಂಕ್ರಯ್ಯ ಗವಿಸಿದ್ದಯ್ಯ ಹಿರೇಮಠ ಎಂಬುವವರು ಈಗ ಶಾಸಕನಾಗುವ ಕನಸು ಕಾಣುತ್ತಿದ್ದಾರೆ. ಆದೇ ಕಾರಣಕ್ಕಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
`ಜನಪ್ರತಿನಿಧಿಯಾಗಿ ಜನಸೇವೆ ಮಾಡಬೇಕೆಂಬ ಮಹದಾಸೆ ಇದೆ. 2007ರಲ್ಲಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದೇನೆ. ಇದೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎಂದು ಗಂಧದಮಠ ಹೇಳುತ್ತಾರೆ.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ಚುನಾವಣಾ ಕಾರ್ಯಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಒಂದು ತಿಂಗಳ ರಜೆಯನ್ನೂ ಹಾಕಿದ್ದಾಗಿ' ಹೇಳಿದರು.
ಇವರ ಗೆಳೆಯರು ಕೂಡಾ ಬೆಂಬಲಕ್ಕಿದ್ದಾರೆ. ಗೆಳೆಯರೊಟ್ಟಿಗೆ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ಹೇಳುತ್ತಾರೆ.
ತಮ್ಮಿಂದ ಹಣ ಖರ್ಚು ಮಾಡಲಾಗುವುದಿಲ್ಲ. ಆದರೂ, ನಿಸ್ವಾರ್ಥ ಸೇವೆಗಾಗಿ ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಾರೆ.
ಕೊಪ್ಪಳದ ಸುಕೋ ಬ್ಯಾಂಕ್ನಲ್ಲಿ 10 ಸಾವಿರ ರೂಪಾಯಿ ನಗದು ಹೊರತುಪಡಿಸಿ ಯಾವುದೇ ಚರಾಸ್ತಿ ಅಥವಾ ಸ್ಥಿರಾಸ್ತಿ ಇಲ್ಲ ಎಂದು ನಾಮಪತ್ರದ ಜೊತೆಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಹೇಳಿಕೊಂಡಿದ್ದಾರೆ.