ಪುಣೆ (ಪಿಟಿಐ): ಪಂಕಜ್ ಅಡ್ವಾಣಿ ಮತ್ತು ಕರ್ನಾಟಕದ ಬಿ. ಭಾಸ್ಕರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪ್ರವೇಶಿಸಿದರು.
ಪಿಎಸ್ಪಿಬಿಯನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಪಂಕಜ್ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 142-151, 150-65, 151- 135, 151-147, 151-16 ರಲ್ಲಿ ರೂಪೇಶ್ ಶಾ ಅವರನ್ನು ಸೋಲಿಸಿದರು.
ಭಾಸ್ಕರ್ 152-20, 150-13, 151-70, 150-2 ರಲ್ಲಿ ರೈಲ್ವೇಯ ಸಿದ್ಧಾರ್ಥ್ ಪಾರಿಖ್ ವಿರುದ್ಧ ಜಯ ಪಡೆದರು. ಸೌರವ್ ಕೊಠಾರಿ ಮತ್ತು ಅಲೋಕ್ ಕುಮಾರ್ ಅವರೂ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟರು.