ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಯ ತಡೆಗೋಡೆ ದುರಸ್ತಿ

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಮಹದೇವಪುರ:  ಕ್ಷೇತ್ರದ ವರ್ತೂರು ಗ್ರಾಮದ ಹೊರವಲಯದಲ್ಲಿ ಕೆರೆಯ ನೀರು ಹರಿದುಹೋಗುವಲ್ಲಿ ನಿರ್ಮಿಸಲಾಗಿರುವ ಸೇತುವೆಯ ತಡೆಗೋಡೆಯನ್ನು ಈಚೆಗೆ ದುರಸ್ತಿಗೊಳಿಸಲಾಯಿತು.

ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಶಿಥಿಲಗೊಂಡಿದೆ. ಅಲ್ಲದೆ ತಡೆಗೋಡೆ ಹಂತ ಹಂತವಾಗಿ ಮುರಿದು ಬೀಳುತ್ತಿದೆ ಎಂಬುದರ ಕುರಿತಾಗಿ `ಪ್ರಜಾವಾಣಿ~ಯಲ್ಲಿ `ಸೇತುವೆ ತಡೆಗೋಡೆಗೆ ಬಿರುಕು~ ಎಂಬ ವರದಿ ಪ್ರಕಟವಾಗಿತ್ತು.

ವರದಿಗೆ ಸ್ಪಂದಿಸಿದ ಬಿಬಿಎಂಪಿ ಕೂಡಲೇ ಮುರಿದು ಬಿದ್ದ ತಡೆಗೋಡೆಯನ್ನು ಸಿಮೆಂಟ್ ಮೂಲಕ ದುರಸ್ತಿಗೊಳಿಸಿದೆ. `ಆದಷ್ಟು ಶೀಘ್ರದಲ್ಲಿ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಬೇಕು~ ಎಂದು ಜನತೆ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT