ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಕಿರುನಾಟಕೋತ್ಸವ ಹಾಗೂ 90ರ ವಸಂತಕ್ಕೆ ಪದಾರ್ಪಣೆ ಮಾಡುತ್ತಿರುವ ಹಿರಿಯ ರಂಗಕರ್ಮಿ ಚನ್ನಬಸಯ್ಯ ಗುಬ್ಬಿ ಅವರಿಗೆ ಗೌರವಾರ್ಪಣ ಸಮಾರಂಭ. `ಬೀಗದ ಕೈ~ (ಮೌನ ನಾಟಕ) ನಾಟಕ ಪ್ರದರ್ಶನ. ನಿರ್ದೇಶನ- ಧನ್ವಂತ್ರಿ ಬಿ. ಎ. ಸಂಜೆ 5.15ಕ್ಕೆ.
`ಬೆಂಗಾಳೂರ ನಿರ್ಮಾತೃ ಕೆಂಪೇಗೌಡ~ ನೃತ್ಯ ನಾಟಕ ಪ್ರದರ್ಶನ. ಸಾಹಿತ್ಯ- ದಿ. ಡಾ. ಎಸ್. ಕೆ. ಕರೀಂಖಾನ್, ರಂಗರೂಪ- ಆಂಜನೇಯ, ನೃತ್ಯ ಸಂಯೋಜನೆ- ಎನ್. ಕಿರಣ್ ಕುಮಾರಿ, ನಿರ್ದೇಶನ- ತುಮಕೂರು ಶಿವಶಂಕರ್, ರಾತ್ರಿ 7ಕ್ಕೆ. `ಗೌರವಾರ್ಪಣ ಸಮಾರಂಭ~. ಉದ್ಘಾಟನೆ- ಶಾಸಕ ಡಾ. ಅಶ್ವಥ್ ನಾರಾಯಣ್ ಸಿ. ಎನ್. ಅಧ್ಯಕ್ಷತೆ- ಬೆಂಗಳೂರು ಪಶ್ಚಿಮ ವಿಭಾಗ ಅಂಚೆ ಇಲಾಖೆ ಚೀಫ್ ಸೂಪರ್ರಿಂಟೆಂಡೆಂಟ್ ಸಣ್ಣನಾಯಕ್, ಅತಿಥಿಗಳು- ಬಿಬಿಎಂಪಿ ಸದಸ್ಯರಾದ ಮೋಹನ್ಕುಮಾರ್, ಜಿ. ಮಂಜುನಾಥರಾಜು. ಶನಿವಾರ ಸಂಜೆ 6.
ಬೀಗದಕೈ - ಮೌನ ನಾಟಕಗಳು ಅತ್ಯಂತ ಕುತೂಹಲಕಾರಿಯಾದ ರಂಗ ಪ್ರಯೋಗಗಳು. ತನ್ನ ಪರಿಮಿತಿ ಸಾಧ್ಯತೆಗಳ ಒಳಗೆ ಮಾತಾಡುವ ನಾಟಕಗಳಿಗೆ ಈ ನಾಟಕಗಳು ಸ್ಪರ್ಧಿಯಾಗಿ ನಿಲ್ಲುತ್ತವೆ. ಇಲ್ಲಿ ಅಭಿನಯವೇ ಮುಖ್ಯ. ಒಂದು ರೀತಿಯಲ್ಲಿ ನಾಟಕಕಾರನೇ ನಿರ್ದೇಶಕ ಎನ್ನಬಹುದು. ಈ ನಾಟಕದಲ್ಲಿ ಸಾವಿನ ಭಯಾನಕತೆ, ಶ್ರಮದ ಮೌಲ್ಯ ಹಾಗೂ ಬಡತನದ ಭೀಕರತೆಯಿಂದ, ಆಟ, ಪಾಠಗಳಿಗೆ ತಿಲಾಂಜಲಿ ನೀಡಿ, ಹೊಟ್ಟೆಪಾಡಿಗಾಗಿ ದುಡಿಯುವ ಮಕ್ಕಳ ಕರುಣಾಜನಕ ಕಥೆ ಇದೆ. ಜೊತೆಗೆ ಮುಗ್ಧತೆ ಸಾಮಾಜಿಕ ಪ್ರೀತಿ, ವಾತ್ಸಲ್ಯಗಳಿಗೆ ಒತ್ತುಕೊಟ್ಟು ರಚಿಸಿರುವ ನಾಟಕ `ಬೀಗದ ಕೈ~.
ಚನ್ನಬಸಯ್ಯ ಗುಬ್ಬಿ- ಆರು ದಶಕಗಳಿಗೂ ಹೆಚ್ಚುಕಾಲ ರಂಗಭೂಮಿಯಲ್ಲಿ ದುಡಿದಿರುವ ಇವರು ರಂಗಭೂಮಿಯ ಸರ್ವ ತಂಡಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವೃತ್ತಿ- ಹವ್ಯಾಸಿ ತಂಡಗಳ ಮಧ್ಯೆ ಕೊಂಡಿಯಾಗಿದ್ದಾರೆ. ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.