ರಾಷ್ಟ್ರೀಯ ಹಿತಗಳ ರಕ್ಷಣೆಗೆ ಸಮಿತಿ ರಚನೆ
ನವದೆಹಲಿ, ಅ. 9 - ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಹಿಂದೂ ಸಮ್ಮೇಳನವು ಇಂದು ಮುಕ್ತಾಯಗೊಂಡಿತು. ರಾಷ್ಟ್ರೀಯ ಹಿತಗಳ ಜಾಗರೂಕತೆ ಸಮಿತಿ ಎಂಬ ಸ್ಥಾಯಿ ಸಮಿತಿಯೊಂದನ್ನು ಸಮ್ಮೇಳನ ರಚಿಸಿತು.
ಸರ್ಕಾರಿ ಕ್ಷೇತ್ರದಿಂದಲೇ ಜನರ ಉದ್ಧಾರ ಸಾಧ್ಯ
ಮದ್ರಾಸ್, ಅ. 9 - `ಅಪಹಾರ ಮತ್ತು ಖಾಸಗಿ ಲಾಭದ ಘೋರ ಸಿದ್ಧಾಂತ~ದಲ್ಲಿ ನಂಬಿಕೆಯುಳ್ಳ ಖಾಸಗಿ ಉದ್ಯಮಕ್ಕೆ ದೇಶದ ನಲವತ್ತು ಕೋಟಿ ಜನರ ಉದ್ಧಾರದ ಬೃಹತ್ ಕಾರ್ಯವನ್ನು ಬಿಡುವುದು ಎಂದೂ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ಶ್ರೀ ನೆಹರೂರವರು ಇಂದು ಇಲ್ಲಿ ದೃಢವಾಗಿ ಘೋಷಿಸಿದರು.