ಚೀಣ ಕ್ರಮವನ್ನು ಭಾರತ ಒಪ್ಪದು
ನವದೆಹಲಿ, ಫೆ. 13- “ಭಾರತ ಹಾಗೂ ಚೀಣ ನಡುವಣ ಗಡಿ ಬಗ್ಗೆ ಚೀಣ ಕೈಗೊಂಡಿರುವ ಏಕಪಕ್ಷೀಯ ಕ್ರಮ ಅಥವಾ ಇತ್ಯರ್ಥವನ್ನು ಭಾರತ ಒಪ್ಪುವುದಿಲ್ಲ” ಎಂಬುದಾಗಿ ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರಪ್ರಸಾದರು ಇಂದು ಪಾರ್ಲಿಮೆಂಟಿನ ಬಡ್ಜೆಟ್ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡುತ್ತಾ ಘೋಷಿಸಿದರು.
ಹೊಸ ವೇತನ ತೀರ್ಮಾನ
ಬೆಂಗಳೂರು, ಫೆ. 13- ಸುಮಾರು 18 ಗಂಟೆ ಪರಿಶೀಲಿಸಿದ ಮಂತ್ರಿಮಂಡಲ ರಾಜ್ಯದ ಒಂದು ಲಕ್ಷ ಅರವತ್ತು ಸಾವಿರ ನೌಕರರ ವೇತನ ವಿಮರ್ಶೆ ಸಮಿತಿಯ ಶಿಫಾರಸುಗಳನ್ನು ಇಂದು “ಕೆಲ ಬದಲಾವಣೆಗಳೊಡನೆ” ಅಂಗೀಕರಿಸಿತು. 1961ನೇ ಜನವರಿ 1 ರಿಂದ ಜಾರಿಗೆ ಬರುವ ನೂತನ ವೇತನ ವ್ಯವಸ್ಥೆಯಲ್ಲಿ ನೌಕರನ ಕನಿಷ್ಠ ವೇತನ ತಿಂಗಳಿಗೆ 60 ರೂಪಾಯಿ (50 ರೂಪಾಯಿ ಮೂಲ ಸಂಬಳ ಮತ್ತು 10 ರೂಪಾಯಿ ತುಟ್ಟಿಭತ್ಯ).