ಪ್ರಥಮ ಆದರ್ಶಕಾರ್ಯ
ನವದೆಹಲಿ, ಮೇ 13- ನೂತನ ರಾಷ್ಟ್ರಪತಿಯಾಗಿ ಡಾ. ಎಸ್. ರಾಧಾಕೃಷ್ಣನ್ ಅವರು ಅಧಿಕಾರ ಸ್ವೀಕರಿಸಿದ ಕೂಡಲೇ ಕೈಗೊಂಡ ಪ್ರಥಮ ಆದರ್ಶ ಕಾರ್ಯವೆಂದರೆ ರಾಜ್ಯಾಂಗದ ಪ್ರಕಾರ ತಾವು ಪಡೆಯಬೇಕಾದ 10,000 ರೂ. ಮಾಹೆಯಾನ ವೇತನವನ್ನು ಕಡಿಮೆ ಮಾಡಿಕೊಂಡುದು.
ಕನ್ನಡ ಶೀಘ್ರವೇ ರಾಜ್ಯದ ಆಡಳಿತ ಭಾಷೆಯಾಗಲು ಕರೆ
ಬೆಂಗಳೂರು, ಮೇ 13- ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಹೊಣೆ ಆಡಳಿತ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಬಿದ್ದಿದೆ. ಅವರು ಮಾತೃಭಾಷೆಯ ಮೇಲೆ ಹೆಚ್ಚಿನ ಅಭಿಮಾನವನ್ನಿಟ್ಟು ಕಾರ್ಯಗತ ಮಾಡಬೇಕೆಂದು ಮೇಯರ್ ವಿ.ಎಸ್. ಕೃಷ್ಣಯ್ಯರ್ ಇಲ್ಲಿ ತಿಳಿಸಿದರು.