ಉನ್ನತಾಧಿಕಾರ ಮಂಡಲಿ ನೇಮಕಕ್ಕೆ ಇನ್ನು ಸಿದ್ಧ
ನವದೆಹಲಿ, ಸೆ. 18 - ಸಿಕ್ಕರ ಕುಂದು ಕೊರತೆಗಳ ಬಗೆಗೆ ತನಿಖೆ ನಡೆಸಲು ಉನ್ನತಾಧಿಕಾರ ಮಂಡಲಿ ನೇಮಿಸುವುದಾಗಿ ತಾವು ಪಾರ್ಲಿಮೆಂಟ್ನಲ್ಲಿ ನೀಡಿದ ಆಶ್ವಾಸನೆಯನ್ನೇ ನೀಡುತ್ತಿರುವುದಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನೆಹರೂ ಸ್ಪಷ್ಟಪಡಿಸಿದರು.
ಸಮೃದ್ಧ ಜೀವನಕ್ಕೆ ದಾರಿ ತೋರುವ ತಾಂತ್ರಿಕ ಶಿಕ್ಷಣ
ಬೆಂಗಳೂರು, ಸೆ. 18 - ಇಂದಿನ ಆಧುನಿಕ ಕಾಲದಲ್ಲಿ ಸಮೃದ್ಧ ಹಾಗೂ ಸುಖಮಯ ಜೀವನಕ್ಕೆ ದಾರಿ ಮಾಡಿಕೊಡುವ ತಾಂತ್ರಿಕ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ದೊರಕಿಸಿ ಕೊಡುವ ಕರ್ತವ್ಯವನ್ನು ಎಲ್ಲ ಪೋಷಕರು ಮನವರಿಕೆ ಮಾಡಿಕೊಳ್ಳಬೇಕೆಂದು ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಇಂದು ಇಲ್ಲಿ ಕರೆ ನೀಡಿದರು.