ನಗರದಲ್ಲಿ ಶೇ. 55.5 ಮತದಾನ
ಬೆಂಗಳೂರು, ಫೆ. 19- ಇಂದು ರಾಜ್ಯದಲ್ಲಿ ಆರಂಭವಾದ ತೃತೀಯ ಮಹಾ ಚುನಾವಣೆಯ ಮತದಾನ, ನಗರದಲ್ಲಿ ಹುರುಪಿನಿಂದ ನಡೆದು ಶೇಕಡ 55.5 ರಷ್ಟು ಮಂದಿ ಮತದಾರರು ಲೋಕಸಭೆ ಹಾಗೂ ವಿಧಾನಸಭೆಗೆ ಮತಚಲಾಯಿಸಿದರು.
ಬಿಕ್ಕಟ್ಟು ತರುವುದೇ ಪಶ್ಚಿಮ ರಾಷ್ಟ್ರಗಳ ಗುರಿ
ಮಾಸ್ಕೋ, ಫೆ. 19- ಜಿನೀವದಲ್ಲಿ ನಡೆಯುವ 18 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನವನ್ನು ಶೃಂಗಸಭೆಯ ಮಟ್ಟಕ್ಕೆ ಏರಿಸಬೇಕೆಂದು ಕರೆ ನೀಡಿ ರಷ್ಯ ಪ್ರಧಾನಿ ಖ್ರುಶ್ಚೋವ್ರವರು ಕಳುಹಿಸಿದ ಪತ್ರಕ್ಕೆ ಪಶ್ಚಿಮ ರಾಷ್ಟ್ರಗಳ ಉತ್ತರ, ಸಮ್ಮೇಳನವನ್ನು ಬಿಕ್ಕಟ್ಟಿಗೆ ಸಿಕ್ಕಿಸುವುದೇ ಪಶ್ಚಿಮ ರಾಷ್ಟ್ರಗಳ ಗುರಿಯೆಂಬುದು ಸ್ಪಷ್ಟಪಟ್ಟಿದೆ