ನಷ್ಟವಾದ ಪ್ರತಿಷ್ಠೆಯನ್ನು ಮತ್ತೆ ಗಳಿಸಲೇಬೇಕು
ಬಾರ್ಡೋಲಿ (ಗುಜರಾತ್), ಡಿ. 23-`ನೀಫ' ಪ್ರದೇಶದಲ್ಲಿ ಭಾರತಕ್ಕುಂಟಾದ ಪರಾಭವಗಳನ್ನು `ನಾಚಿಕೆ, ಅಪಮಾನ ಮತ್ತು ದುಃಖದಾಯಕ ಸಂಗತಿ'ಗಳೆಂದು ಪರಿಗಣಿಸಬೇಕೆಂದೂ, ಕಳೆದುಕೊಂಡ ಪ್ರತಿಷ್ಠೆಯನ್ನು ನಾವು ಮತ್ತೆ ಗಳಿಸಿಕೊಳ್ಳಲೇಬೇಕೆಂದೂ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ರವರು ಇಂದು ಇಲ್ಲಿ ತಿಳಿಸಿದರು.