ಹೊಸ ಸಚಿವರಿಂದಪ್ರಮಾಣ ವಚನ
ಬೆಂಗಳೂರು, ಫೆ. 27- ರಾಜ್ಯದ ನೂತನ ಸಚಿವರಾದ ಶ್ರೀ ಎಚ್. ಕೆ. ವೀರಣ್ಣಗೌಡ, ಎಚ್. ಎಸ್. ರುದ್ರಪ್ಪ, ಬಿ. ವೈಕುಂಠ ಬಾಳಿಗ ಮತ್ತು ವೀರೇಂದ್ರ ಪಾಟೀಲ್ ಅವರು ಇಂದು ಬೆಂಗಳೂರು ಅರಮನೆಯಲ್ಲಿ ಬೆಳಿಗ್ಗೆ 9-30ಕ್ಕೆ ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಹೋದ್ಯೋಗಿಗಳೊಡನೆ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಆಗಮಿಸಿದರು.
ಸುಖೀ ರಾಜ್ಯ ಸ್ಥಾಪನೆಗುರಿಯತ್ತ ಪ್ರಗತಿ
ಬೆಂಗಳೂರು, ಫೆ. 27- ‘ಸುಖೀ ರಾಜ್ಯವನ್ನು ಸ್ಥಾಪಿಸಬೇಕೆಂಬುದೇ ನಮ್ಮ ಗುರಿಯಾಗಿದೆ. ಮೂರನೇ ಪಂಚವಾರ್ಷಿಕ ಯೋಜನೆಯು ಆರಂಭವಾಗುವುದಕ್ಕೆ ಪೂರ್ವಭಾವಿಯಾಗಿಯೇ ಬಹುಮಟ್ಟಿಗೆ ನಾವು ಈ ಗುರಿ ಸಮೀಪಕ್ಕೆ ಬಂದಿರುತ್ತೇವೆಂದು ಧಾರಾಳವಾಗಿ ಹೇಳಬಹುದಾಗಿದೆ’ ಎಂದು ಮೈಸೂರು ರಾಜ್ಯಪಾಲರು ವಿಧಾನ ಮಂಡಲದ ಸಂಯುಕ್ತಾಧಿವೇಶನದಲ್ಲಿ ಇಂದು ಭಾಷಣ ಮಾಡುತ್ತಾ ತಿಳಿಸಿದರು.