ವಿರೋಧ ಪಕ್ಷಗಳ ಎಲ್ಲಸದಸ್ಯರ ಗೈರು ಹಾಜರಿ
ಲಕ್ನೋ, ಫೆ. 6- ಉತ್ತರಪ್ರದೇಶ ವಿಧಾನಮಂಡಲದ ಆಯವ್ಯಯದ ಅಧಿವೇಶನವು ಇಂದು ಆರಂಭವಾಯಿತು. ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ರಾಜ್ಯಪಾಲ ಶ್ರೀ ಬಿ. ರಾಮಕೃಷ್ಣರಾಯರು ಆರಂಭ ಭಾಷಣ ಮಾಡಿದಾಗ ವಿರೋಧ ಪಕ್ಷಗಳ ಸದಸ್ಯರಾರೂ ಹಾಜರಿರಲಿಲ್ಲ.
ಸಸ್ಪೆನ್ಷನ್ ಪ್ರಶ್ನಿಸಿ ರಿಟ್ ಅರ್ಜಿ
ಬೆಂಗಳೂರು, ಫೆ. 6- ತಮ್ಮನ್ನು ಸಸ್ಪೆಂಡ್ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆಜ್ಞೆ ಕ್ರಮಬದ್ಧತೆ ಪ್ರಶ್ನಿಸಿ ನೀರಾವರಿ ಛೀಫ್ ಎಂಜಿನಿಯರ್ ಶ್ರೀ ಎಂ.ಎಚ್. ಮಂಚಿಗಯ್ಯ ಸಲ್ಲಿಸಿದ ರಿಟ್ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಶ್ರೀ ಸೋಮನಾಥ್ ಅಯ್ಯರ್ ಹಾಗೂ ಶ್ರೀ ನಾರಾಯಣಪೈ ಅವರು ಸ್ವೀಕರಿಸಿದರು.