–ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ
* ಆಮ್ ಆದ್ಮ ಪಕ್ಷದ ಉದಯ ಉಭಯ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಕಳವಳದ ಸಂಗತಿ ಎಂಬುದನ್ನು ಒಪ್ಪಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ, ‘ದೆಹಲಿಯಲ್ಲಿ ಒಂದು ಸ್ಥಳೀಯ ಪಕ್ಷಕ್ಕೆ ಸ್ಥಾನ ದೊರೆತಿದೆ. ಪ್ರಾದೇಶಿಕ ಪ್ರಣಾಳಿಕೆ ರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸುತ್ತಿದೆ. ಆಮ್ ಆದ್ಮಿ ಪಕ್ಷದ ಮತಗಳು ನೈಜವಾಗಿ ಬಿಜೆಪಿಗೆ ಬರಬೇಕಿತ್ತು. ಆಗ ಬಿಜೆಪಿಗೆ ಅಮೋಘ ಜಯ ಲಭಿಸುತ್ತಿತ್ತು. ಆದರೆ ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಲ್ಲಿ ಬಿಜೆಪಿ ವಿಫಲವಾಯಿತು.ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಲು ಅಸಮರ್ಥವಾಗಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿದವು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.