ಅಹಮದಾಬಾದ್ (ಪಿಟಿಐ): ಸುಮಾರು 400 ಕೋಟಿ ರೂಪಾಯಿ ಮೊತ್ತದ ಮೀನುಗಾರಿಕಾ ಗುತ್ತಿಗೆ ಹಗರಣದಲ್ಲಿ ವಹಿಸಿದ್ದಾರೆನ್ನಲಾದ ಪಾತ್ರಕ್ಕಾಗಿ ಸಚಿವ ಪುರುಷೋತ್ತಮ ಸೋಳಂಕಿ ವಿರುದ್ಧ ಖಟ್ಲೆ ಹೂಡಲು ಅನುಮತಿ ನೀಡುವ ವಿಚಾರದಲ್ಲಿ ~ಅಂತಿಮ ನಿರ್ಧಾರ~ ಕೈಗೊಳ್ಳುವಂತೆ ಗುಜರಾತ್ ಹೈಕೋರ್ಟ್ ರಾಜ್ಯಪಾಲರಾದ ಕಮ್ಲಾ ಬೇನಿವಾಲ್ ಅವರಿಗೆ ಶುಕ್ರವಾರ ನಿರ್ದೇಶನ ನೀಡಿತು.
ಇದರಿಂದಾಗಿ ಈ ಪ್ರಕರಣದಲ್ಲಿ ಗುಜರಾತ್ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಏನಿದ್ದರೂ ಖಟ್ಲೆ ಹೂಡಲು ಅನುಮತಿ ಮಂಜೂರು ಮಾರಲು ನಿರಾಕರಿಸಿದ ರಾಜ್ಯದ ಕ್ರಮಕ್ಕಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಲಯ ನಿಂದನೆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.