ಬಿಬಿಎಂಪಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಮೆಟ್ರೊ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವೇ ದುರಸ್ತಿಪಡಿಸಬೇಕಾಗಿತ್ತು. ಆದರೆ, ಅದು ಮೆಟ್ರೊ ನಿಲ್ದಾಣಗಳ ಸುತ್ತಮುತ್ತ ಮಾತ್ರ ರಸ್ತೆ ದುರಸ್ತಿ ಮಾಡಿದೆ. `ನಮ್ಮ ವೆುಟ್ರೊ~ ಒಂದು ಐತಿಹಾಸಿಕ ಸಮಾರಂಭವಾಗಿರುವುದರಿಂದ ವಿಶೇಷ ಗಣ್ಯರು ಆಗಮಿಸಲಿರುವ ರಸ್ತೆ ಹಾಗೂ ವೃತ್ತಗಳನ್ನೂ ಪಾಲಿಕೆಯೇ ದುರಸ್ತಿ ಮಾಡಿದೆ ಎಂದು ಮೇಯರ್ ಪಿ. ಶಾರದಮ್ಮ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.