ಎರಡೂ ಕೈಗಳನ್ನು ಜೋಡಿಸಿ ನಮಸ್ತೆ ಮಾಡುವಂತೆ ಸೇರಿಸಬೇಕು. ನಂತರ ಹೆಬ್ಬೆರಳನ್ನು ದೂರ ಇಡಬೇಕು. ಅನಂತರ ಪರಸ್ಪರ ವಿರುದ್ಧ ಕೈಗಳ ತೋರು ಬೆರಳು, ಮಧ್ಯದ ಬೆರಳಿನ ತುದಿಯನ್ನು ಸ್ಪರ್ಶಿಸಬೇಕು. ಕಿರುಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ತಾಗಿಸಬೇಕು. ಹೆಬ್ಬೆರಳುಗಳು ಒಂದಕ್ಕೊಂದು ತಾಗಿರಬಾರದು. ಈ ಮುದ್ರೆ ದನದ ಕೆಚ್ಚಲಿನಂತೆ ಕಾಣುವುದರಿಂದ ಇದಕ್ಕೆ ಸುರಭಿ ಮುದ್ರೆ ಎಂದು ಕರೆಯಲಾಗುತ್ತದೆ.
ಪ್ರಯೋಜನ
ಸುರಭಿ ಮುದ್ರೆಯ ಪರಿಣಾಮ ಅದ್ಭುತ. ಶರೀರದ ಮೂರು ವಿಕಾರಗಳಾದ ವಾತ, ಪಿತ್ತ, ಕಫಗಳನ್ನು ನಿಯಂತ್ರಿಸುತ್ತದೆ. ಅಸಿಡಿಟಿ ದೂರವಾಗಿ ದೇಹದ ಜಡತೆಯನ್ನು ಶಮನಗೊಳಿಸುತ್ತದೆ. ಸುರಭಿ ಮುದ್ರೆಯನ್ನು 10 ನಿಮಿಷ ಮಾಡಿದರೂ ಉತ್ತಮ ಫಲಿತಾಂಶ ದೊರೆಯುತ್ತದೆ. ಹೆಬ್ಬೆರಳನ್ನು ಬಿಟ್ಟು ಉಳಿದ ಬೆರಳುಗಳ ಸಂಯೋಜನೆಯಿಂದಾಗಿ ನಾಲ್ಕು ತತ್ವಗಳು ಸೇರಿಕೊಂಡು ದೇಹದಲ್ಲಿ ಅದ್ಭುತ ಪರಿಣಾಮಗಳು ಉಂಟಾಗುತ್ತವೆ. ಮೂರ್ನಾಲ್ಕು ಮುದ್ರೆಗಳನ್ನು ಮಾಡಿದ ಫಲ ದೊರೆಯುತ್ತದೆ. ಹಾಗಾಗಿ ಇದೊಂದು ಅತಿ ಮುಖ್ಯವಾದ ಮುದ್ರೆ.