ಕೊಳ್ಳೇಗಾಲ: ಅಂಗವಿಕಲರಿಗೆ ಸರ್ಕಾ ರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಮರ್ಪಕ ಅರಿವಿನ ಕೊರತೆ ಇದೆ. ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಲಕ್ಷ್ಮಣ್ರಾವ್ ಮಿಸ್ಕಿನ್ ತಿಳಿಸಿದರು.
ಸರ್ಕಾರದ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾ ಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಜಿ.ಗೀತಾಂಜಲಿ, ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ಎ.ಶಿಲ್ಪಾ, ವಕೀಲರ ಸಂಘದ ಅಧ್ಯಕ್ಷ ಮಾದಪ್ಪ, ವಕೀಲರಾದ ನಾಗರಾಜು, ಮಹದೇವ ಪ್ರಭು, ರಾಧಾಕೃಷ್ಣ, ಸಂಪತ್ತು, ಅಶೋಕ್, ಮಷಣನಾಯಕ, ಮಹಾದೇವ ಇತರರು ಉಪಸ್ಥಿತರಿದ್ದರು.