ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಶಾಸಕ ಎಮ್. ಎಸ್. ಧೀರ್ ಅವರನ್ನು ಸಭಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದೆ.
ದೆಹಲಿ ಶಾಸನ ಸಭೆಯ ಅತ್ಯಂತ ಹಿರಿಯ ಶಾಸಕರಾಗಿರುವ ಮುಖಿ ಹಂಗಾಮಿ ಸ್ಪೀಕರ್ ಆಗಲು ನಿರಾಕರಿಸಿದ್ದರು. ನಂತರದ ಸ್ಥಾನದಲ್ಲಿರುವ ಜೆಡಿಯು ಶಾಸಕ ಶೋಯಿಬ್ ಇಕ್ಬಾಲ್ ಕೂಡ ಈ ಸ್ಥಾನ ಒಲ್ಲೆನೆಂದರು. ಹಾಗಾಗಿ ಕಾಂಗ್ರೆಸ್ ಶಾಸಕ ಮತೀನ್ ಅಹ್ಮದ್ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಿಸಲಾಯಿತು.
ಶುಕ್ರವಾರ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಒಟ್ಟು 70 ಸದಸ್ಯರ ಸದನದಲ್ಲಿ ಎಎಪಿ 28 ಶಾಸಕರನ್ನು ಹೊಂದಿದೆ. ಈ ಪಕ್ಷದ ಅಭ್ಯರ್ಥಿ ಆಯ್ಕೆಗೆ ಎಂಟು ಮತಗಳ ಕೊರತೆ ಇದೆ. ಆದರೆ ಎಎಪಿಗೆ ಕಾಂಗ್ರೆಸ್ನ ಎಂಟು ಶಾಸಕರ ಬೆಂಬಲ ಇದೆ.