ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಭೂಮಿಯಲ್ಲಿ ನಿವೇಶನ ಹಂಚಿಕೆ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ:  ಮಾಜಿ ಕ್ರಿಕೆಟ್‌ ಆಟಗಾರ ಕೀರ್ಮಾನಿ ಅವರ ಸಹೋ ದರನ ನಿವೇಶನ ಚಂದ್ರ ಲೇಔಟ್‌ನ ಐಟಿಐ ಬಡಾವಣೆಯ ದಲಿತರ ಸ್ಮಶಾನದಲ್ಲಿರುವುದು ಕಂಡು ಬಂದಿದ್ದು,  ಈ ಬಗ್ಗೆ  ಪರಿಶೀಲನೆ ನಡೆಸಲಾಗುವುದು ಎಂದು  ಮೇಯರ್‌ ಬಿ.ಎಸ್‌. ಸತ್ಯನಾ ರಾಯಣ ತಿಳಿಸಿದರು.

ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಐಟಿಐ ಹೌಸಿಂಗ್‌ ಸೊಸೈಟಿಯಿಂದ ಈ ನಿವೇಶನವನ್ನು ದಲಿತರ ರುದ್ರಭೂಮಿಯಲ್ಲಿ ಹಂಚಿಕೆ ಮಾಡಿರುವುದು  ಕಂಡುಬಂದಿದ್ದು  ಸರ್ವೇ ಮತ್ತು ಸಂಬಂಧಪಟ್ಟ ದಾಖ ಲೆಗಳನ್ನು ಪರಿಶೀಲಿಸಿ ವರದಿ ನೀಡು ವಂತೆ ಕಂದಾಯ ಇಲಾಖೆಯ ಅಧಿಕಾ ರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸೊಸೈಟಿಯವರು ಕೀರ್ಮಾನಿ ಸಹೋದರನಿಗೆ ನಾಲ್ಕುಸಾವಿರ ಚದರ ಅಡಿಯ ನಿವೇಶನವನ್ನು  ದಲಿತರ ರುದ್ರಭೂಮಿ ಜಾಗದಲ್ಲಿ ಮಂಜೂರು ಮಾಡಿದ್ದಾರೆ. ಈ ಬಗ್ಗೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ. ಸಮಗ್ರ ಪರಿಶೀಲನೆಯ ನಂತರವಷ್ಟೆ  ಸತ್ಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT