ರಾಜರಾಜೇಶ್ವರಿನಗರ: ಮಾಜಿ ಕ್ರಿಕೆಟ್ ಆಟಗಾರ ಕೀರ್ಮಾನಿ ಅವರ ಸಹೋ ದರನ ನಿವೇಶನ ಚಂದ್ರ ಲೇಔಟ್ನ ಐಟಿಐ ಬಡಾವಣೆಯ ದಲಿತರ ಸ್ಮಶಾನದಲ್ಲಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮೇಯರ್ ಬಿ.ಎಸ್. ಸತ್ಯನಾ ರಾಯಣ ತಿಳಿಸಿದರು.
ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಐಟಿಐ ಹೌಸಿಂಗ್ ಸೊಸೈಟಿಯಿಂದ ಈ ನಿವೇಶನವನ್ನು ದಲಿತರ ರುದ್ರಭೂಮಿಯಲ್ಲಿ ಹಂಚಿಕೆ ಮಾಡಿರುವುದು ಕಂಡುಬಂದಿದ್ದು ಸರ್ವೇ ಮತ್ತು ಸಂಬಂಧಪಟ್ಟ ದಾಖ ಲೆಗಳನ್ನು ಪರಿಶೀಲಿಸಿ ವರದಿ ನೀಡು ವಂತೆ ಕಂದಾಯ ಇಲಾಖೆಯ ಅಧಿಕಾ ರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸೊಸೈಟಿಯವರು ಕೀರ್ಮಾನಿ ಸಹೋದರನಿಗೆ ನಾಲ್ಕುಸಾವಿರ ಚದರ ಅಡಿಯ ನಿವೇಶನವನ್ನು ದಲಿತರ ರುದ್ರಭೂಮಿ ಜಾಗದಲ್ಲಿ ಮಂಜೂರು ಮಾಡಿದ್ದಾರೆ. ಈ ಬಗ್ಗೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ. ಸಮಗ್ರ ಪರಿಶೀಲನೆಯ ನಂತರವಷ್ಟೆ ಸತ್ಯ ಬೆಳಕಿಗೆ ಬರಲಿದೆ ಎಂದು ತಿಳಿಸಿದರು.