ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ವೆಚ್ಚದಲ್ಲಿ ಹೂಳೆತ್ತಿದ ರೈತರು

Last Updated 22 ಫೆಬ್ರುವರಿ 2012, 5:40 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು, ಅಂದನೂರು, ಚಿಕ್ಕಎಮ್ಮಿಗನೂರು, ಕಾಟಯ್ಯನ ಕೆರೆಗಳಲ್ಲಿ ಕಳೆದ 3 ತಿಂಗಳುಗಳಿಂದ ರೈತರೇ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನವೆಂಬರ್ ತಿಂಗಳಿನ ಮಧ್ಯದಿಂದಲೇ ರೈತರು ಸ್ವಂತ ಖರ್ಚಿನಿಂದ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ. ಪ್ರತಿ ದಿನ 40-50 ಟ್ರ್ಯಾಕ್ಟರ್ ಹಾಗೂ 4-5 ಟಿಪ್ಪರ್‌ಗಳಲ್ಲಿ ರೈತರು ತಮ್ಮ ಹೊಲ-ತೋಟಗಳಿಗೆ ಮಣ್ಣನ್ನು ಏರಿಸುತ್ತಿದ್ದಾರೆ. ಪ್ರತಿಯೊಂದು ಕೆರೆಯಲ್ಲೂ 2-3 ಜೆಸಿಬಿ, ಹಿಟಾಚಿ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರತಿ ಟ್ರ್ಯಾಕ್ಟರ್ ಟ್ರಿಪ್ ಒಂದಕ್ಕೆ ರೂ. 50-75ಗಳನ್ನು, ಟಿಪ್ಪರ್ ಒಂದಕ್ಕೆ ರೂ. 150ನ್ನು ಜೆಸಿಬಿ/ಹಿಟಾಚಿ ಯಂತ್ರಗಳ ಮಾಲೀಕರಿಗೆ ನೀಡಿ ಮಣ್ಣನ್ನು ತಮ್ಮ ಹೊಲ-ತೋಟಗಳಿಗೆ ಏರಿಸುತ್ತಿದ್ದಾರೆ. ಇಲ್ಲಿಯವರೆಗೆ  ಹೋಬಳಿಯ ರೈತರು ಯಂತ್ರ ಮತ್ತು ವಾಹನಗಳ  ಬಾಡಿಗೆ ಎಂದು ಸುಮಾರು ರೂ. 1ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ.

ಹೋಬಳಿಯ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ ಈ ಕೆರೆಗಳ ಖುದ್ದು ಪರಿಶೀಲನೆ ನಡೆಸಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದೂ ಹಾಗೂ ಇದರ ಲಾಭವನ್ನು ಯಾವುದೇ ರಾಜಕೀಯ ಹಿತಾಸಕ್ತಿಗಳಿಗೆ ನೀಡಬಾರದು ಎಂದು ಹೋಬಳಿಯ ರೈತರು  ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT