`ಮರಳು ಸಾಗಣೆ ಲಾರಿ ಮಾಲೀಕರ ಸಮಸ್ಯೆ ಬಗೆಹರಿಸಿ' ಎಂದು ಲೋಕೋಪಯೋಗಿ ಸಚಿವರನ್ನು ಕೇಳಿದರೆ `ಸಮಸ್ಯೆ ಬಗೆಹರಿಸಲು ಎರಡು ತಿಂಗಳ ಕಾಲಾವಕಾಶ ಕೊಡಿ' ಎಂದು ಕೇಳಿದ ಮಂತ್ರಿ ಮಹಾಶಯರು, ಅಲ್ಲಿಯವರೆಗೆ ಅಧಿಕಾರಿಗಳೊಂದಿಗೆ, ಪೊಲೀಸರೊಂದಿಗೆ `ಅಡ್ಜೆಸ್ಟ್' ಮಾಡಿ ಕೊಂಡು ಸಾಗಣೆ ಮಾಡಿ ಎಂದು, ಖುಲ್ಲಂಖುಲ್ಲಾ, ರಾಜಾರೋಷವಾಗಿ ಲಂಚಗುಳಿತನ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವುದು, `ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ'.
ಲೋಕೋಪಯೋಗಿ ಮಂತ್ರಿ ಲೋಕೋಪಕಾರ ಮಾಡುವ ಸಲುವಾಗಿ ಮರಳು ಸಾಗಣೆ ಸಮಸ್ಯೆಗೆ `ಸರಳ ಉಪಾಯ ಸೂಚಿಸಿ' ಸನ್ಮಾರ್ಗ ದರ್ಶನ ಮಾಡಿದ್ದಾರೆ!