ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ ಸಮಾಜ ನಿರ್ಮಾಣ- ಯುವಪೀಳಿಗೆ ಪಾತ್ರ ಮಹತ್ವದ್ದು

Last Updated 23 ಸೆಪ್ಟೆಂಬರ್ 2011, 7:50 IST
ಅಕ್ಷರ ಗಾತ್ರ

ಕಾರ್ಕಳ: `ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನವಪೀಳಿಗೆಯ ಪಾತ್ರ ಮಹತ್ವದ್ದು~ ಎಂದು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3180ಯ ಗವರ್ನರ್ ಎಚ್.ಎಲ್.ರವಿ ತಿಳಿಸಿದರು.

ಇಲ್ಲಿನ ರೋಟರಿ ಕ್ಲಬ್‌ಗೆ ಇತ್ತೀಚೆಗೆ ಅಧಿಕೃತ ಸಂದರ್ಶನ ನೀಡಿದ ಅವರು ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜದಲ್ಲಿ ಆವರಿಸಿದ ಭ್ರಷ್ಟಾಚಾರ, ಅನಿಷ್ಟಗಳ ನಿರ್ಮೂಲನ, ಸ್ವಸ್ಥ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಯುವಕರು ಪ್ರಯತ್ನಶೀಲರಾಗಬೇಕು.

ಅಣ್ಣಾಹಜಾರೆಯವರ ಹೋರಾಟ ಗಾಂಧಿತತ್ವಗಳನ್ನು ಪುನಶ್ಚೇತನಗೊಳಿಸಿದೆ. ಇದರ ಪರಿಣಾಮವಾಗಿ ಯುವಜನತೆ ಹಾಗೂ ಪ್ರಜ್ಞಾವಂತ ನಾಗರಿಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆಗಾರಿಕೆಯನ್ನು ಜಾಗೃತಗೊಳಿಸಿದಂತಾಗಿದೆ ಎಂದರು.

ರೋಟರಿ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್ ಕ್ಲಬ್ ಪತ್ರಿಕೆ `ಸರ್ವಿಸ್~ ಅನಾವರಣಗೊಳಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ವಲಯ ಸೇನಾನಿ ಎಂ.ಜಿ.ನಾಗೇಂದ್ರ ಕ್ಲಬ್ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು.

ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಆಚಾರ್ಯ, ಪ್ರಭಾತ್‌ಕುಮಾರ್, ಭರತ್‌ರಾಜ್, ಮಾಜಿ ಸಹಾಯಕ ಗವರ್ನರ್ ಎಂ.ಎನ್.ಧನಕೀರ್ತಿ, ಕಾರ್ಯದರ್ಶಿ ಡಿ.ಸಿ ಶಾಂತಪ್ಪ, ಮೋಹನ್ ಪಡಿವಾಳ್, ಜ್ಯೋತಿ ಪದ್ಮನಾಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT