ಅಂಗನವಾಡಿಗಳಿಗೆ ವಿಭಿನ್ನವಾದ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಕೆಲವು ದಿನಗಳ ಹಿಂದೆ ನೀಡಿರುವ ಹೇಳಿಕೆ ಸ್ವಾಗತಾರ್ಹ.
ಮುಗ್ಧ ಮನಸ್ಸುಗಳಿಗೆ ಆಟ-ಪಾಠದೊಂದಿಗೆ ಪುಷ್ಟಿಕರ ಊಟ ಸಿಕ್ಕರೆ ಅವರ ಮನಸ್ಸು ಮತ್ತು ದೇಹ ವಿಕಾಸಗೊಳ್ಳುತ್ತದೆ. ಉತ್ತಮ ಆಹಾರ ನೀಡುವುದರ ಜತೆಗೆ ಈ ಕೇಂದ್ರಗಳ ಅಭಿವೃದ್ಧಿ ಕಡೆಗೂ ಸರ್ಕಾರ ಗಮನ ಹರಿಸಬೇಕು.