ರಾಜರಾಜೇಶ್ವರಿನಗರ: ಸಮೀಪದ ಸೊಣ್ಣೇನಹಳ್ಳಿಯಲ್ಲಿ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂತು.
ಇದೇ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ನಂಜಾವದೂತ ಸ್ವಾಮೀಜಿ, ಸಂತೋಷ್ ಗುರೂಜಿ ಅವರಿಗೆ ಬಿಬಿಎಂಪಿ ಸದಸ್ಯ ಎ.ಎಂ.ಹನುಮಂತೇಗೌಡ ಮತ್ತು ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಲತಾ ಹನುಮಂತೇಗೌಡ ಗುರುವಂದನೆ ಸಲ್ಲಿಸಿದರು.
ಹನುಮಂತೇಗೌಡ ಕುಟುಂಬದಿಂದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗೆ ಇನ್ನೋವಾ ಕಾರನ್ನು ಕಾಣಿಕೆಯಾಗಿ ಅರ್ಪಿಸಲಾಯಿತು.
ಶಿವಕುಮಾರ ಸ್ವಾಮೀಜಿ ಮಾತನಾಡಿ ದೇವರ ಸ್ಮರಣೆ ಜತೆಗೆ ಸಮಾಜ ಸೇವೆಯೇ ಪ್ರತಿಯೊಬ್ಬರ ಗುರಿಯಾಗಬೇಕು ಎಂದು ಹೇಳಿದರು.
ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮಾನವ ಜೀವನ ಅತ್ಯಂತ ಪವಿತ್ರವಾದದ್ದು ಭಗವಂತ ನೀಡಿದ ಸಿರಿತನದಲ್ಲಿ ಬಡವರಿಗೆ ಅಲ್ಪ ಕಾಣಿಕೆ ನೀಡಿ ಅವರಲ್ಲೇ ದೇವರನ್ನು ಕಾಣಬಹುದು ಎಂದರು.
ಶಾಸಕರಾದ ಎಚ್.ಸಿ.ಬಾಲಕೃಷ್ಣ, ಅಶ್ವತ್ಥನಾರಾಯಣ, ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಲಕ್ಷ್ಮಮ್ಮ, ಮುನಿಯಪ್ಪ, ರಾಧಾ ಶ್ರೀನಿವಾಸ್, ಸಿ.ಎಂ.-ಮಾರೇಗೌಡ, ಟೆಂಟ್ ಮಂಜಣ್ಣ, ಜಿ.ಪಂ.ಉಪಾಧ್ಯಕ್ಷೆ ಜಿನ್ನಬಾಯಿ ನಾಗರಾಜು, ಸದಸ್ಯೆ ಸರ್ವಮಂಗಳ ಕೃಷ್ಣಪ್ಪ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬೆಟ್ಟಯ್ಯ, ಹೇರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಘಟಕದ ಜೆಡಿಎಸ್ ಅಧ್ಯಕ್ಷೆ ಯಶೋದ ಹಾಜರಿದ್ದರು.