ಮುಂಬೈ (ಐಎಎನ್ಎಸ್): `ಸ್ವಾರ್ಥಿ ಜನರು, ನಿಷ್ಪ್ರಯೋಜಕರ ಗುಂಪು~ ಎಂದು ಅಣ್ಣಾ ತಂಡದ ಸದಸ್ಯರಾದ ಮನೀಶ್ ಸಿಸೊಡಿಯಾ, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಅವರ ವಿರುದ್ಧ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರು ಭಾನುವಾರ ಟೀಕಿಸಿದ್ದಾರೆ.
ಪಕ್ಷದ ಮುಖವಾಣಿ `ಸಾಮ್ನಾ~ಕ್ಕೆ ನೀಡಿರುವ ಸಂದರ್ಶನದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ವಿರುದ್ಧ ಠಾಕ್ರೆ ವಾಗ್ದಾಳಿ ಮಾಡಿದ್ದಾರೆ.
`ಕ್ಷುಲ್ಲಕ ಕಾರಣಗಳಿಗಾಗಿ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬಲವಂತವಾಗಿ ಇತರರೂ ಇದನ್ನು ಮಾಡುವಂತೆ ಒತ್ತಾಯಿಸುತ್ತಾರೆ. ಇದು `ರಾಜಕೀಯ ಬಲಾತ್ಕಾರ~ವಲ್ಲದೆ ಬೇರೇನಲ್ಲ~ ಎಂದು ಅಭಿಪ್ರಾಯಪಟ್ಟಿದ್ದಾರೆ. `ಸಾಕಷ್ಟು ಪ್ರಚಾರ ಗಿಟ್ಟಿಸಿದ್ದ ಲೋಕಪಾಲ ಮಸೂದೆ ಏನಾಯಿತು? ನಿಜವಾಗಿಯೂ ದೇಶಕ್ಕೆ ಅದರ ಅಗತ್ಯ ಇದೆಯೇ, ಇದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯೆ?~ ಎಂದು ಪ್ರಶ್ನಿಸಿದ್ದಾರೆ.