ಬಿಎಸ್ಪಿ ತೊರೆದು ಬಿಜೆಪಿ ಸೇರಿದ ನಂತರ ಇದೇ ಮೊದಲ ಬಾರಿಗೆ ಮಾತನಾಡಿದ ಅವರು, `ಬಿಎಸ್ಪಿಗೆ 28 ವರ್ಷಗಳ ಸೇವೆ ಸಲ್ಲಿಸಿದ ನಂತರ ನನ್ನನ್ನು ಉಚ್ಛಾಟಿಸಲಾಗಿದೆ. ಹಿಂದುಳಿದ ವರ್ಗಗಳಲ್ಲಿ ನನ್ನ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸದೆ ಹೀಗೆ ಮಾಡಲಾಗಿದೆ~ ಎಂದು `ಸೈನಿ ಶಕ್ಯ ಕುಶಾವ~ ಜನಾಂಗದ ಸಮಾವೇಶದಲ್ಲಿ ಹೇಳಿದರು.