ರಂಗಭಾರತಿ ಕಾರ್ಯಾಧ್ಯಕ್ಷ ಎಂ.ಪಿ.ರವೀಂದ್ರ ಮಾತನಾಡಿ ಪ್ರತಿ ಯೊಂದು ಕ್ಷೇತ್ರಗಳನ್ನು ಅರಿತವರಾಗಿದ್ದು ಮತ್ತು ಸರ್ವರನ್ನೂ ಗೌರವದಿಂದ ಪ್ರೀತಿಸುತ್ತಿದ್ದರು ಎಂದರು.
ಪ್ರೊ.ಶಾಂತಮೂರ್ತಿ ಬಿ. ಕುಲಕರ್ಣಿ ಮಾತನಾಡಿ ಎಂ.ಪಿ.ಪ್ರಕಾಶ್ ದಣಿವರಿಯದ ಓದುಗಾರ, ಸರ್ವ ತೋಮುಖ ಅಭಿವೃದ್ಧಿಯ ಹರಿಕಾರ ರಾಗಿದ್ದರು ಎಂದರು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
ಹೊಸಪೇಟೆಯ ಕೊಟ್ಟೂರು ಸ್ವಾಮಿಮಠದ ಜಗದ್ಗುರು ಸಂಗನಬಸವ ಸ್ವಾಮೀಜಿ ಮಾತನಾಡಿ ಎಂ.ಪಿ.ರವೀಂದ್ರ ಅವರು, ಪ್ರಕಾಶರ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದರು.
ಸ್ವಾಮಿಗಳು ರಾಜಕೀಯ ಪ್ರವೇಶಿಸ ಬಾರದು, ತಪ್ಪು ಮಾಡಿದವರಿಗೆ ಬುದ್ಧಿ ಹೇಳಬೇಕು ಎಂದ ಅವರು ಮೌಲ್ಯವನ್ನು ಕಳೆದುಕೊಂಡ ರಾಜಕೀಯ ವ್ಯವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಲಿಂಗನಾಯ್ಕನ ಹಳ್ಳಿಯ ಚನ್ನವೀರ ಸ್ವಾಮೀಜಿ, ಮಾನಿಹಳ್ಳಿ ಮಳೆ ಯೋಗೀಶ್ವರ ಸ್ವಾಮೀಜಿ, ಗುಡ್ಡದ ಆನ್ವೇರಿ ಶ್ರೀಗಳು, ಅಗಡಿ ಶ್ರೀಗಳು ಉಪಸ್ಥಿತರಿದ್ದರು. ಶಿಕ್ಷಕ ಕೆ.ಶರಣಬಸಪ್ಪ ಸ್ವಾಗತಿಸಿದರು. ಶಿಕ್ಷಕ ಎಸ್.ದ್ವಾರಕೇಶರೆಡ್ಡಿ ನಿರೂಪಿಸಿದರು. ಸವಿತಾ ಕುಂಬಾರಶೆಟ್ರು ವಂದಿಸಿದರು.