ಕೊಲಂಬೊ (ಪಿಟಿಐ): ಥೇನ್ ಚಂಡಮಾರುತದಿಂದ ಹಾನಿಗೀಡಾಗಿರುವ ಭಾರತದ ಮೀನುಗಾರಿಕಾ ಹಡಗನ್ನು ದುರಸ್ತಿ ಮಾಡಲು ತಮಿಳುನಾಡಿನ 81 ಜನರ ತಂಡ ಶ್ರೀಲಂಕಾಗೆ ಆಗಮಿಸುತ್ತಿದೆ.
ಕಳೆದ ತಿಂಗಳು ಉಂಟಾದ ಚಂಡಮಾರುತದಿಂದ 40 ಮೀನುಗಾರರಿರುವ ಒಂಬತ್ತು ಭಾರತೀಯ ಹಡಗುಗಳು ತೊಂದರೆಗೆ ಸಿಲುಕಿದ್ದವು. ಅವರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿತ್ತು.