ರೋಮ್ (ಐಎಎನ್ಎಸ್): ತನ್ನಿಬ್ಬರು ಯೋಧರು ಭಾರತದ ಮೀನುಗಾರರಿಬ್ಬರನ್ನು ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ತೀರದಲ್ಲಿ ಹಡಗು ನಿಲ್ಲಿಸಿದ್ದಕ್ಕೆ ಇಟಲಿ ನೌಕಾಪಡೆ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಇಟಲಿ ಸರ್ಕಾರ ಈಗ ತನಿಖೆ ಆರಂಭಿಸಿದೆ. ಕರ್ನಲ್ ದರ್ಜೆ ಅಧಿಕಾರಿಯೊಬ್ಬರು ಸೇನಾ ಕೇಂದ್ರ ಕಚೇರಿ ಮತ್ತು ಹಡಗು ಕಂಪೆನಿಯಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ಅಂತರರಾಷ್ಟ್ರೀಯ ಸಮುದ್ರ ಮಾರ್ಗ ಬಿಟ್ಟು ಭಾರತೀಯ ಸಮುದ್ರದೊಳಗೆ ತೆರಳಲು ಹಡಗು ಕಂಪೆನಿಗೆ ಅನುಮತಿ ನೀಡಿದ್ದು ಯಾರು. ಆ ನಿರ್ಧಾರ ಕೈಗೊಂಡ್ದ್ದಿದೇಕೆ ಎಂದು ಪ್ರಶ್ನಿಸಲಿದೆ.