ಕೋಲ್ಕತ್ತ (ಪಿಟಿಐ): ಆಹಾರ ಪೂರೈಕೆ ಸರಪಣಿಯಲ್ಲಿನ ಲೋಪಗಳನ್ನು ಬಗೆಹರಿಸಿದರೆ, ಹಣದುಬ್ಬರವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟಂಬರ್ 20ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಎರಡಂಕಿ ತಲುಪಿದ್ದು, ಶೇ 10.5ರಷ್ಟಾಗಿದೆ. ಹಣದುಬ್ಬರ ತಗ್ಗಿಸಲು ಸರ್ಕಾರ ತುರ್ತಾಗಿ, ಕೆಲವು ಅಗತ್ಯ ವಸ್ತುಗಳ ಪೂರೈಕೆ ಹೆಚ್ಚಿಸಲಿದೆ ಎಂದು ಅವರು ಹೇಳಿದ್ದಾರೆ.