ಶುಕ್ರವಾರ, 3–1–1964
ಹದಿನಾರು ವರ್ಷದಿಂದಲೂ ಹರಿಜನರ ಬಗೆಗೆ ಸಾಕಷ್ಟು ಗಮನ ಕೊಡಲಾಗಿಲ್ಲ: ನೆಹ್ರು
ನವದೆಹಲಿ, ಜ. 2 – ನಾಡಿಗೆ ಸ್ವಾತಂತ್ರ್ಯ ಬಂದ ಈ ಹದಿನಾರು ವರ್ಷಗಳ ಅವಧಿಯಲ್ಲಿ ಹರಿಜನರು ಮತ್ತು ಇತರ ಹಿಂದುಳಿದ ವರ್ಗಗಳ ಏಳಿಗೆಗೆ ಸಾಕಷ್ಟು ಗಮನ ಕೊಡಲಾಗಿಲ್ಲವೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ಒಪ್ಪಿಕೊಂಡರು.
ಮೆಟ್ರಿಕ್ಯುಲೇಷನ್ವರಗೆ ಆಂಧ್ರದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ
ಹೈದರಾಬಾದ್, ಜ. 2 – ಇನ್ನು ಮುಂದೆ ಆಂಧ್ರ ಪ್ರದೇಶದಲ್ಲಿ ವಿದ್ಯಾರ್ಥಿನಿಯರಿಗೆ ಮೆಟ್ರಿಕ್ಯುಲೇಷನ್ವರೆವಿಗೆ ಉಚಿತ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಇಂದು ನಿರ್ಧರಿಸಿತು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 20 ಲಕ್ಷ ರೂ. ಆದಾಯ ಕಮ್ಮಿಯಾಗುವುದೆಂದು ವಕ್ತಾರರೊಬ್ಬರು ಪತ್ರಕರ್ತರಿಗೆ ತಿಳಿಸಿದರು.