ಶ್ರೀಕರಾಚಾರ ಹೊಸಪೇಟೆ, ರಾಮಾಚಾರ ಗಂಗೂರ, ಧೀರೇಂದ್ರಾಚಾರ ಪೂಜಾರ, ರಾಮಾಚಾರ ಉಮರ್ಜಿ, ಬಿಂದಾಚಾರ ಜೋಶಿ, ಜಯತೀರ್ಥಾಚಾರ ಹುಂಡೆಕಾರ, ವಿನೋದಾಚಾರ ಗಲಗಲಿ, ಜಿತೇಂದ್ರಾಚಾರ ಬಳ್ಳಾರಿ, ಶ್ರೀನಿವಾಸಾಚಾರ ಋಗ್ವೇದಿ, ಶ್ರೀನಿವಾಸಾಚಾರ ಮಠದ, ಫಣಿರಾಮಾಚಾರ ಇವರನ್ನು ಸಪ್ತಾಹದ ಅಂಗವಾಗಿ ಸನ್ಮಾನಿಸಲಾಯಿತು. ಸಪ್ತಾಹದಲ್ಲಿ ಮಕ್ಕಳು ಕೃಷ್ಣ ಹಾಗೂ ಯಶೋಧೆಯ ವೇಷ ತೊಟ್ಟು ಕೃಷ್ಣನ ವಿವಿಧ ಲೀಲೆಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು.
ಶುಕ್ರವಾರ ಬೆಳಿಗ್ಗೆ ಜ್ಞಾನದಾಯಿನಿ ಪಾಠಶಾಲೆಯಲ್ಲಿ ಜಪ, ಸಮಗ್ರ ಭಾಗವತದ ಹೋಮ, ಸಮಗ್ರ ಭಾಗವತದ ಪ್ರವಚನ, ಸಹಸ್ರ ನಾಮಾರ್ಚನೆ, ವಿವಿಧ ಭಜನಾ ಮಂಡಳಿಗಳಿಂದ ದೇವರ ಸಂಕೀರ್ತನೆ ಕಾರ್ಯಕ್ರಮಗಳು ಜರುಗಿದವು. ಮುಂಬಯಿ ಘನಶಾಮ ರಾಖೇ ಮತ್ತು ರಾಜಗೋಪಾಲ ಸಪ್ತಾಹದ ಸೇವೆ ಸಲ್ಲಿಸಿದರು. ಹನುಮಸಾಗರ, ಕುಷ್ಟಗಿ, ಇಳಕಲ್ಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.