ಹನ್ನೆರಡನೇ ಶತಮಾನದ ಮಹಾ ಚೇತನ ಜಗಜ್ಯೋತಿ ಬಸವೇಶ್ವರರು ವಿಶ್ವಕ್ಕೆ ಸಾರಿದ ಸಾಮಾಜಿಕ ಸಮಾನತೆ ಹಾಗೂ ಶರಣರ ವಚನ ತತ್ವ ಇಂದಿಗೂ ಎಂದೆಂದಿಗೂ ಅನ್ವಯಿಸುವ ಸರಳ ಸತ್ಯ. ಸಾಮಾಜಿಕ ಕ್ರಾಂತಿಗೆ ಜೀವನವನ್ನೇ ಅರ್ಪಿಸಿದ ಹರಳಯ್ಯ ಮಧುವರಸರ ನೆನಪಿಗಾಗಿ ಮಾರ್ಚ್ 5 ಹಾಗೂ 6ರಂದು ಹುತಾತ್ಮರ ದಿನಾಚರಣೆಯನ್ನು ಬಸವ ಕಲ್ಯಾಣದಲ್ಲಿ ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ.
ಆದರೆ ಇದನ್ನು ವಿರೋಧಿಸುವ ಕೆಲವು ಮಹನೀಯರು ಬಸವೇಶ್ವರರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಎಂದು ತಿಳಿಯಬೇಕಾಗುತ್ತದೆ. ಇದು ನಿಜಕ್ಕೂ ವಿಪರ್ಯಾಸ.