’ನಾವು ಎಲ್ಲಾದರೂ ಹೊರಗೆ ಹೋದರೆ ಹೊಲೇರ ಸ್ವಾಮೀಜಿ ಬಂದರು ಎಂದು ಕರೆಯುತ್ತಾರೆ. ಜನತೆ ಹಾಗೆ ಕರೆದರೆ ನಮಗೆ ಸಂತಸವಾಗುತ್ತದೆ. ಬುದ್ಧ, ಬಸವ, ಗಾಂಧೀಜಿ, ಅಂಬೇಡ್ಕರ್ ಕೂಡ ಇದೇ ರೀತಿ ಶೋಷಿತರ ಪರವಾಗಿ ಕೆಲಸ ಮಾಡುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ನಾವು ಕೂಡ ಕೇವಲ ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಹಿಂದುಳಿದ ಎಲ್ಲ ಸಮುದಾಯಗಳ ಬೆಳವಣಿಗೆ ಬಗ್ಗೆ ಚಿಂತನೆ ಮಾಡುತ್ತೇವೆ’ ಎಂದು ತಿಳಿಸಿದರು.