ಕಥಾಕೀರ್ತನವನ್ನು (ಹರಿಕಥೆ) ಪುನರುತ್ಥಾನಗೊಳಿಸುವ ಉದ್ದೇಶದೊಂದಿಗೆ ಇತ್ತೀಚೆಗೆ `ಷಡ್ಜಕಲಾ ಕೇಂದ್ರ~ ಕಾರ್ಯಾರಂಭ ಮಾಡಿದೆ. ಇಲ್ಲಿ ಹರಿಕಥೆಯನ್ನು ಕ್ರಮಬದ್ಧವಾಗಿ ಕಲಿಸಿಕೊಡಲಾಗುತ್ತದೆ.
ಜೊತೆಗೆ ಪ್ರವಚನ, ದಾಸಸಾಹಿತ್ಯ, ಸಂತಸಾಹಿತ್ಯಗಳ ಅಧ್ಯಯನಕ್ಕೂ ಅವಕಾಶವಿದೆ. ತರಗತಿಗಳನ್ನು ಕೀರ್ತನ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ನಡೆಸಿಕೊಡಲಿದ್ದಾರೆ. ದತ್ತಾತ್ರೇಯ ವೇಲಣಕರ್ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಶ್ರೀನಾಥ ಬಿದರೆ ಅವರು ಚಿತ್ರಕಲೆ ಕಲಿಸುತ್ತಾರೆ.
ಉದ್ಘಾಟನೆಯಲ್ಲಿ ಡಾ. ಭದ್ರಗಿರಿ ಅಚ್ಯುತದಾಸ, ವಿನಾಯಕ ತೊರವಿ, ಭದ್ರಗಿರಿ ಸರ್ವೋತ್ತಮದಾಸ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀನಾಥ್ ಅವರ ಚಿತ್ರಕಲೆಗಳ ಪ್ರದರ್ಶನ ಆಯೋಜಿಸಲಾಗಿತ್ತು. ಜ