ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲಗೊಂಡಿದೆ. ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಔರಾದ್ 10 ಸೆಂ. ಮೀ., ಡಬ್ಕಾ 8, ಸಂತಾಪುರ 7, ವಿರಾಜಪೇಟೆ, ಬಾಳೆಹೊನ್ನೂರು 5, ಮಂಕಿ, ಚಿತ್ತಾಪುರ 4, ಕೊಲ್ಲೂರು, ಭಟ್ಕಳ, ಕುಮಟಾ, ಶಿರಾಲಿ, ಚಿಕ್ಕೋಡಿ, ಭಾಗಮಂಡಲ, ಕೊಟ್ಟಿಗೆಹಾರ 3, ಬಂಟ್ವಾಳ, ಹೊನ್ನಾವರ, ಲೋಕಾಪುರ, ಮಹಾಲಿಂಗಪುರ, ಜಮಖಂಡಿ, ಸೇಡಂ, ಮೂಡಿಗೆರೆ 2, ಮಂಗಳೂರು, ಕೋಟಾ, ಕುಂದಾಪುರ, ಸಿದ್ದಾಪುರ, ಅಂಕೋಲಾ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಮದುರ್ಗ, ಲಿಂಗನಮಕ್ಕಿ, ತಾಳಗುಪ್ಪದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಕೊಪ್ಪಳದಲ್ಲಿ ಗರಿಷ್ಠ ಉಷ್ಣಾಂಶ 31.5 ಡಿಗ್ರಿ ಸೆಲ್ಸಿಯಸ್ ಮತ್ತು ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ 17.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.