ಈ ಸಂಬಂಧ ತನಗಾಗಿರುವ ದೈಹಿಕ ಹಲ್ಲೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ಪ್ರಮಾಣ ಪತ್ರದೊಂದಿಗೆ ಟಿ.ಆರ್. ಕೃಷ್ಣಪ್ಪ ದೂರು ದಾಖಲಿಸಿದರೂ ಸಂಬಂಧಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ಕೃಷ್ಣಪ್ಪ ವಿರುದ್ಧ ಆ ಅಧಿಕಾರಿ ದಾಖಲಿಸಿದ ಸುಳ್ಳು ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಸಭ್ಯವಾಗಿ ವರ್ತಿಸಿದ ಅಧಿಕಾರಿ ಮೇಲೆ ಇಲಾಖೆ, ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಪಿಯುಸಿಎಲ್ ಜಿಲ್ಲಾ ಕಾರ್ಯದರ್ಶಿ ಸರ್ಜಾಶಂಕರ ಹರಳಿಮಠ, ಕರ್ನಾಟಕ ಜನಶಕ್ತಿ ಸಂಚಾಲಕ ಕೆ.ಎಲ್. ಅಶೋಕ್, ವಿಚಾರವಾದಿ ವೇದಿಕೆಯ ಡಿ.ಎಸ್. ಶಿವಕುಮಾರ್, ಪಿಎಫ್ಐನ ಸಲೀಮ್ ಮತ್ತಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.