ಮಾಲ್ಡಾ/ಪಶ್ಚಿಮ ಬಂಗಾಳ (ಪಿಟಿಐ): ಚುನಾವಣಾ ಆಯೋಗದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಸಚಿವೆ ಸಾವಿತ್ರಿ ಮಿತ್ರಾ ಅವರ ಮೊಮ್ಮಗ ಸೇರಿದಂತೆ ನಾಲ್ಕು ಜನರ ಬಂಧನದ ಅವಧಿಯನ್ನು ಐದು ದಿನ ವಿಸ್ತರಿಸಲಾಗಿದೆ.
ಮಿತ್ರಾ ಅವರ ಮೊಮ್ಮಗ ಸಮದೀಪ್ ಸರ್ಕಾರ್ ಅಲಿಯಾಸ್ ಟಿಂಕು, ಮೊತಿ ಉರ್ ರೆಹಮಾನ್, ಮುಕ್ಲೆ ಸುರ್ ರೆಹಮಾನ್ ಮತ್ತು ಜಮಾಲ್ ಖಾನ್ ಅವರನ್ನು ಶನಿವಾರ ಇಲ್ಲಿನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸುಮಿತ್ರಾ ದೇವ್ ಎದುರು ಹಾಜರುಪಡಿಸಲಾಯಿತು.