ಆದರೆ ವೈಯಕ್ತಿಕವಾಗಿ ತಮಗೆ ಯಾವುದೇ ಬೆದರಿಕೆ ಕರೆ ಅಥವಾ ಸಂದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ.
ಅಣ್ಣಾ ತಂಡದ ಮತ್ತೊಬ್ಬ ಸದಸ್ಯ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರ ಮೇಲೆ ಕಳೆದ ವಾರ ಅವರ ಕಚೇರಿಯಲ್ಲಿ ಹಲ್ಲೆ ಮಾಡಲಾಗಿತ್ತು. ಕಾಶ್ಮೀರ ಬಗ್ಗೆ ಜನಮತಗಣನೆ ನಡೆಸಬೇಕೆಂದು ನೀಡಿದ್ದ ಹೇಳಿಕೆಯೇ ಅವರ ಮೇಲಿನ ಹಲ್ಲೆಗೆ ಕಾರಣವೆಂದು ಹೇಳುತ್ತಿದ್ದರೂ, ಘಟನೆ ಹಿಂದೆ `ಪಿತೂರಿ~ ಇದೆ ಎಂದು ಅಣ್ಣಾ ತಂಡ ಭಾವಿಸಿದೆ.