ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಿದೆ. ಪಾಂಡವಪುರ 6 ಸೆಂ.ಮೀ. ಟಿ. ನರಸೀಪುರ 5 ಸೆಂ.ಮೀ. ಚಿಕ್ಕೋಡಿ, ಭಾಗಮಂಡಲ, ಮೂಡಿಗೆರೆಯಲ್ಲಿ 3 ಸೆಂ.ಮೀ. ಧಾರವಾಡ, ಹಾರಂಗಿಯಲ್ಲಿ 2 ಸೆಂ.ಮೀ. ಕೃಷ್ಣರಾಜ ಸಾಗರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದ್ದು, ಬೆಳಗಾವಿಯಲ್ಲಿ 15.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.