ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ರಘುನಾಥ್‌ಗೆ ರೂ 1 ಲಕ್ಷ ಬಹುಮಾನ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ ತಂಡದ ಮೂವರು ಆಟಗಾರರಿಗೆ ಹಾಕಿ ಇಂಡಿಯಾ ತಲಾ ಒಂದು ಲಕ್ಷ ರೂಪಾಯಿ  ಬಹುಮಾನ ಪ್ರಕಟಿಸಿದೆ.

ಟೂರ್ನಿಯ ‘ಅತ್ಯುತ್ತಮ ಆಟ­ಗಾರ’ ಪ್ರಶಸ್ತಿ ಪಡೆದ ಕರ್ನಾಟಕದ ವಿ.ಆರ್‌.ರಘುನಾಥ್‌, ‘ಅತ್ಯುತ್ತಮ ಗೋಲ್‌ ಕೀಪರ್‌’ ಎನಿಸಿದ ಕೇರಳದ ಪಿ.ಆರ್‌.ಶ್ರೀಜೇಶ್‌ ಹಾಗೂ ಪದಾ­ರ್ಪಣೆ ಪಂದ್ಯದಲ್ಲಿ ಗೋಲು ಗಳಿಸಿದ ರಮಣದೀಪ್‌ ಸಿಂಗ್‌ ಅವರು ತಲಾ ಒಂದು ಲಕ್ಷ ರೂಪಾಯಿ ಪಡೆಯಲಿದ್ದಾರೆ.

‘ಎರಡನೇ ಸ್ಥಾನ ಪಡೆದ ತಂಡಕ್ಕೆ ಅಭಿನಂದನೆ. ಈ ಟೂರ್ನಿಯ ಎರಡು ವೈಯಕ್ತಿಕ ಪ್ರಶಸ್ತಿಗಳು ನಮ್ಮ ತಂಡದ ಪಾಲಾಗಿದೆ. ಇದು ನಮ್ಮ ಪ್ರದರ್ಶನ ಮಟ್ಟಕ್ಕೆ ಉದಾಹರಣೆ’ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೀಂದರ್‌ ಬಾತ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT