ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ಕಾರ ಕಡೆಗಣಿಸಿದೆ ಎಂದು ಅಧ್ಯಕ್ಷಪುಂಡಲೀಕ ಹಾಲಂಬಿ ಅವರು ವೃಥಾ ಮೈ ಪರಚಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಅವರು ಅಧ್ಯಕ್ಷರಾದ ನಂತರ ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ನಿಂತೇಹೋಗಿದೆ! ‘ಕನ್ನಡ ನುಡಿ’ ಕೂಡ ಸರಿಯಾಗಿ ಬರುತ್ತಿಲ್ಲ!
79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಾಗೂ ಸಾರ್ವಜನಿಕರು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದರೂ ಪ್ರತಿನಿಧಿಗಳಿಗೆ ಊಟವೇ ಸಿಗಲಿಲ್ಲ! ಇವೆಲ್ಲ ಸ್ವತಃ ಹಾಲಂಬಿ ಅವರ ವೈಫಲ್ಯಗಳಲ್ಲವೇ? ಇನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಕಸಾಪಕ್ಕೆ ಕೋಟ್ಯಂತರ ಹಣ ಬಿಡುಗಡೆ ಮಾಡಿದ ವರದಿ ‘ಪ್ರಜಾವಾಣಿ’ಯಲ್ಲಿ (ಡಿ.18) ಪ್ರಕಟವಾಗಿದೆ.
ಬಳ್ಳಾರಿ ಜಿಲ್ಲಾ ಘಟಕ ಈಚೆಗೆ ಆರಂಭಿಸಿದ ಅಂತರ್ಜಾಲವನ್ನು ಸ್ವತಃ ಉಮಾಶ್ರೀ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಸ್ತುಸ್ಥಿತಿ ಹೀಗಿದೆ. ಮೊದಲು ಹಾಲಂಬಿ ಅವರು ಕ್ರಿಯಾಶೀಲರಾಗಲಿ. –ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಬಳ್ಳಾರಿ ಜಿ.