ಮುಳಬಾಗಲು: ಇಂಧನ ಬೆಲೆ ಏರಿಕೆಯಿಂದ ಹಾಲು ಉತ್ಪಾದನಾ ವೆಚ್ಚ ಹೆಚ್ಚಿದೆ. ಈ ಕಾರಣದಿಂದ ಹಾಲಿನ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದು ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ತಿಳಿಸಿದ್ದಾರೆ.
ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ಬುಧವಾರ ನಡೆದ ಬೈರಕೂರು ಮತ್ತು ನಂಗಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಮಾವೇಶದಲ್ಲಿ ಮಾತನಾಡಿದರು.
ಕೋಲಾರ ಹಾಲು ಒಕ್ಕೂಟದಲ್ಲಿ ಶೇ.30 ರಷ್ಟು ನಷ್ಟವಾಗುತ್ತಿದೆ. ಗುಣಮಟ್ಟದ ಹಾಲು ಪೂರೈಸದಿದ್ದಲ್ಲಿ ಸಹಕಾರ ಸಂಘ ಮುಚ್ಚಬೇಕಾಗಬಹುದು ಎಂದು ಎಚ್ಚರಿಸಿದರು.
ಈಚೆಗೆ ನಿಧನರಾದ ಹಾಲು ಉತ್ಪಾದಕರ ಅವಲಂಭಿತರಿಗೆ ತಲಾ ಐದು ಸಾವಿರ ರೂಪಾಯಿ ನೀಡಿದರು.
ಕೋಮುಲ್ ಉಪ ವ್ಯವಸ್ಥಾಪಕ ಡಾ.ಪುಣ್ಯಕೋಟಿ, ಶ್ರೀರಾಮರೆಡ್ಡಿ, ವಿಸ್ತರಣಾಧಿಕಾರಿಗಳಾದ ಆನಂದ್, ಮುರಳಿನಾಥ್, ನರಸಿಂಹರೆಡ್ಡಿ, ಇಫ್ಕೋ ಕಂಪನಿಯ ಮೋಹನ್, ಶ್ರೀರಾಮ್.ಕೃಷಿ ಅಧಿಕಾರಿ ಜಿತೇಂದ್ರ. ನಾಗರಾಜ್ ಭಾಗವಹಿಸಿದ್ದರು.