ಈ ಸಂದರ್ಭದಲ್ಲಿ ತನಗೆ ನ್ಯಾಯ ಒದಗಿಸುವಂತೆ ಅವರು ರಾಜಣ್ಣ ರೆಡ್ಡಿ ಅವರನ್ನು ವಿನಂತಿಸಿದ್ದರು. ಅದಕ್ಕಾಗಿ ರೆಡ್ಡಿ 25ಸಾವಿರ ಲಂಚ ಕೇಳಿದ್ದರು. ಹಣ ನೀಡಲು ಸಿದ್ಧರಿಲ್ಲದ ಶ್ರೀನಿವಾಸ್ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಗುರುವಾರ ಪೊಲೀಸರ ನಿರ್ದೇಶನದಂತೆ ರಾಜಣ್ಣ ರೆಡ್ಡಿ ಅವರಿಗೆ ಹತ್ತುಸಾವಿರ ರೂಪಾಯಿ ಲಂಚ ನೀಡುವ ಸನ್ನಿವೇಶ ಸೃಷ್ಟಿಸಿ ಪೊಲೀಸರು ರೆಡ್ಡಿ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರ ನಿರ್ದೇಶನದಲ್ಲಿ ಡಿ.ವೈ.ಎಸ್ಪಿ ಶಿವಬಸಪ್ಪ, ಇನ್ಸ್ಪೆಕ್ಟರ್ ಶಾಂತಿನಾಥ ಹಾಗೂ ಇತರ ಸಿಬ್ಬಂದಿ ದಾಳಿ ನಡೆಸಿದ್ದರು.