ನವದೆಹಲಿ: ರಾಜಭಾಷಾ ಸಂಘರ್ಷ ಸಮಿತಿಯು ಸರ್ಕಾರೇತರ ಸಂಘಟನೆಯಾಗಿದ್ದು ಪ್ರತಿ ವರ್ಷ ಹಿಂದಿ ಭಾಷಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ.
ಈ ವರ್ಷದ ಕಾರ್ಯಕ್ರಮ ಆಗಸ್ಟ್ 18ರಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿಂದಿ ಭಾಷೆಗೆ ಸೇವೆ ಸಲ್ಲಿಸಿದ12 ಜನ ಗಣ್ಯರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಕರ್ನಾಟಕದಿಂದ 4, ಅಸ್ಸಾಂನಿಂದ 2, ಮಹಾರಾಷ್ಟ್ರದಿಂದ 2, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ದೆಹಲಿಯಿಂದ ತಲಾ ಒಬ್ಬರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮ ಖ್ಯಾತ ಹಿಂದಿ ಸಾಹಿತಿಗಳಾದ ಜಗನ್ನಾಥ ಮತ್ತು ವಿಶ್ವಂಭರ ಪ್ರಸಾದ್ ಇವರ ಸ್ಮರಣಾರ್ಥ ನಡೆಯಲಿದೆ.