ಯುಜಿಸಿ ಸುತ್ತೊಲೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದ ಅಣ್ಣಾ ವಿಶ್ವವಿದ್ಯಾಲಯ ಮತ್ತು ಅಲಗಪ್ಪ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ತಮಿಳುನಾಡು ಸರ್ಕಾರ ’ ಯುಜಿಸಿ ಸುತ್ತೊಲೆಯನ್ನು ಅನುಷ್ಠಾನ’ಗೊಳಿಸದಿರಲು ಸೂಚಿಸಿದೆ.
ಗುಜರಾತ್ನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಯಾಕೆ ಹಿಂದಿಯನ್ನು ಕಲಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಜಯಲಲಿತಾ ಅವರು ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಭಾಷಾ ಕಲಿಕೆ ಸಮಂಜಸವಾದುದಲ್ಲ ಎಂದು ಹೇಳಿದ್ದಾರೆ.
ಬಲವಂತವಾಗಿ ಹಿಂದಿ ಹೇರಿಕೆ ಕುರಿತಂತೆ ವಿರೋಧ ಪಕ್ಷ ಡಿಎಂಕೆ ಮೌನವಾಗಿರುವುದರ ಹಿಂದಿನ ಉದ್ದೇಶ ಏನು ಎಂದು ಜಯಲಲಿತಾ ಡಿಎಂಕೆ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.