ಅಂಕೋಲಾ: ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಗಂಡು ಚಿರತೆ ಯೊಂದು ಬಂಧಿಯಾದ ಘಟನೆ ತಾಲ್ಲೂಕಿನ ಹಿಚ್ಕಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕಳೆದ ಹಲವು ತಿಂಗಳುಗಳಿಂದ ಚಿರತೆಯ ಕಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯವರು ಗುರುವಾರ ರಾತ್ರಿ ಹಿಚ್ಕಡ ಗ್ರಾಮದ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ನಾಯಿ ಮರಿಗಳನ್ನು ಹಾಕಿದ ಬೋನನ್ನು ಇಡಲಾಗಿತ್ತು.
ಗುರುವಾರ ರಾತ್ರಿ ಬೇಟೆಗೆ ಬಂದ ಈ ಚಿರತೆ ಬೋನಿ ನೊಳಗೆ ತೆರಳುತ್ತಿದ್ದಂತೆಯೇ ಬಂಧಿಯಾ ಯಿತು. ಇದರಿಂದಾಗಿ ಸ್ಥಳೀಯರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಶುಕ್ರವಾರ ಈ ಚಿರತೆಯನ್ನು ಜೋಯಿಡಾದ ಅಣಶಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.