ಶ್ರೀನಗರ (ಪಿಟಿಐ): ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಮಂಗಳವಾರ ಹಿಮಪಾತದಿಂದಾಗಿ ಗಡಿ ಭದ್ರತಾ ಪಡೆಯ ಒಬ್ಬ ಅಧಿಕಾರಿ ಮೃತಪಟ್ಟು, ಭದ್ರತಾ ಪಡೆಗೆ ಸೇರಿದ ಇತರ ಆರು ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಿಂದಾಗಿ ಗಡಿ ಭದ್ರತಾ ಪಡೆಯ ಸಬ್ ಇನ್ಸ್ಪೆಕ್ಟರ್ ನರೇಂದ್ರ ಕುಮಾರ್ ಮೃತಪಟ್ಟಿದ್ದು,ಆರು ಯೋಧರು ನಾಪತ್ತೆಯಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.