ಸುದೀಪ್ತ ಸಾವು ಆಕಸ್ಮಿಕ?
ಸ್ನಾತಕೋತ್ತರ ವಿದ್ಯಾರ್ಥಿ, ಎಸ್ಎಫ್ಐ ಕಾರ್ಯಕರ್ತ ಸುದೀಪ್ತ ಗುಪ್ತಾ ಅವರ ಸಾವಿನ ಕುರಿತು ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, `ಇದೊಂದು ದುರಾದುಷ್ಟಕರ ಘಟನೆ. ವಿದ್ಯಾರ್ಥಿ ಗುಪ್ತ ಅವರ ಸಾವು ಆಕಸ್ಮಿಕವಾದದ್ದೇ ಹೊರತು ಪೊಲೀಸರ ಲಾಠಿಚಾರ್ಜ್ನಿಂದ ಆಗಿರುವುದಲ್ಲ' ಎಂದು ಸ್ಪಷ್ಟಪಡಿಸಿದರು.
ಎಸ್ಎಫ್ಐ ಪ್ರತಿಭಟನೆ : ಸುದೀಪ್ತ ಅವರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಎಸ್ಎಫ್ಐ ಸಂಘಟನೆ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಅಲ್ಲದೇ ಮಮತಾ ಬ್ಯಾನರ್ಜಿ ಅವರ ಪ್ರತಿಕೃತಿಯನ್ನು ದಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, `ಎರಡು ವರ್ಷಕ್ಕೊಮ್ಮೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘದ ವಾರ್ಷಿಕ ಚುನಾವಣೆಯನ್ನು ಏರ್ಪಡಿಸುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ವಿದ್ಯಾರ್ಥಿ ಸಂಘಟನೆಯನ್ನು ಬಲಹೀನಗೊಳಿಸಿದೆ' ಎಂದು ದೂರಿದರು.
`ಪಶ್ಚಿಮ ಬಂಗಾಳ ಸರ್ಕಾರ ವಿದ್ಯಾರ್ಥಿ ಸಂಘಟನೆಗಳ ಚಳವಳಿಗಳನ್ನು ಹತ್ತಿಕ್ಕುವ ಮೂಲಕ ವಿದ್ಯಾರ್ಥಿ ಒಕ್ಕೂಟದ ದನಿಯನ್ನು ಅಡಗಿಸುತ್ತಿದೆ' ಎಂದು ಕಿಡಿಕಾರಿದರು.