ಬೆಂಗಳೂರು: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆಯ ಕಚೇರಿಯನ್ನು ಸಚಿವ ಕೃಷಿ ಕೃಷ್ಣ ಬೈರೇಗೌಡ ಅವರು ಈಚೆಗೆ ಉದ್ಘಾಟಿಸಿದರು.
ನಗರ ಪಾಲಿಕೆ ಸದಸ್ಯೆಯರಾದ ನಂದಿನಿ ಶ್ರೀನಿವಾಸ್, ಯಶೋದಮ್ಮ ಕೃಷ್ಣಪ್ಪ, ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷ ಡಾ. ಕೆ. ಎಸ್. ಗಂಗಾಧರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಟಿ. ಬಯಣ್ಣ ವಂದಿಸಿದರು. ಉಪಾಧ್ಯಕ್ಷ ಅಶ್ವತ್ಥಪ್ಪ, ಜಂಟಿ ಕಾರ್ಯದರ್ಶಿ ವೆಂಕಟರಾಮನ್ ಭಾಗವಹಿಸಿದ್ದರು.